ತರಕಾರಿ ತೋಟ....
ಶಾಲೆಯಲ್ಲಿ ಪರಿಸರ ಸಂಘದ ವತಿಯಿಂದ ತರಕಾರಿ ತೋಟ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ್ ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಕೃಷಿಯ ಕುರಿತಾದ ಮಾಹಿತಿ ನೀಡಿದರು.ಕೃಷಿ ಭವನದಿಂದ ನೀಡಲಾದ ಬೀಜಗಳನ್ನು ಈ ಸಂದರ್ಭದಲ್ಲಿ ಬಿತ್ತಲಾಯಿತು.ಅಲ್ಲದೆ ಇನ್ನಿತರ ಕೆಲವು ತರಕಾರಿ ಗಿಡಗಳನ್ನು ಈ ಸಂದರ್ಭದಲ್ಲಿ ನೆಡಲಾಯಿತು.ಮತ್ತು ಇವುಗಳನ್ನು ಪೋಷಿಸಿ ಬೆಳೆಸುವ ತೀರ್ಮಾನವನ್ನು ಕೈಗೊಂಡು ಇದಕ್ಕಾಗಿ ಕೆಲವು ತಂಡಗಳನ್ನು ರಚಿಸಲಾಯಿತು.
No comments:
Post a Comment