Sunday 16 November 2014

Parental Awarness Class

ಅನುದಾನಿತ ಹಿರಿಯ ಬುನಾದಿ ಶಾಲೆ ಕುಂಟಿಕಾನದಲ್ಲಿ ತಾ 14/11/2014  ರಂದು ಬದಲಾದ ಶಿಕ್ಷಣ ನೀತಿಯಲ್ಲಿ ಹೆತ್ತವರ ಪಾತ್ರದ ಕುರಿತು ವಿಶೇಷ ತಿಳುವಳಿಕಾ ಶಿಬಿರವು ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರುರವರ ಜನ್ಮ ದಿನದಂದು ಮಕ್ಕಳ ದಿನಾಚರಣೆಯೊಂದಿಗೆ ಜರಗಿತು.ಮಕ್ಕಳಿಗಾಗಿ ಚಿತ್ರರಚನೆ,ಸಾಹಿತ್ಯ ಸಭೆ ಹಾಗೂ ವಿವಿಧ ಸ್ಪರ್ದೆಗಳು ನಡೆದವು.ನಂತರ ನಡೆದ ತಿಳುವಳಿಕಾ ಶಿಬಿರವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ್ ಉದ್ಘಾಟಿಸಿದರು.ಸಭೆಯ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಮಹಾಲಿಂಗೇಶ್ವರ ಭಟ್ ವಹಿಸಿದ್ದರು.ಅಧ್ಯಾಪಕ ಕೃಷ್ಣನ್ ನಂಬೂದಿರಿ ಪ್ರಾಸ್ಥಾವಿಕ ನುಡಿಗಳನ್ನಾಡಿದರೆ,ಪ್ರಶಾಂತ ಕುಮಾರ್ ಬಿ ಶುಭ ಹಾರೈಸಿದರು.ಅಧ್ಯಾಪಕರಾದ ಅಬ್ದುಲ್ ಸಲಾಂ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.ಅಧ್ಯಾಪಕ ವಿ ವೆಂಕಟ್ರಾಜ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಸುದರ್ಶನ ಎ ಧನ್ಯವಾದವನ್ನಿತ್ತರು.ಅಧ್ಯಾಪಕಿ ದಿನ ಕೆ ಕಾರ್ಯಕ್ರಮ ನಿರೂಪಿಸಿದರು.ಸುಮಾರು ನೂರಕ್ಕೂ ಅಧಿಕ ಹೆತ್ತವರು ಶಿಬಿರದ ಉಪಯೋಗವನ್ನು ಪಡೆದುಕೊಂಡರು.





No comments:

Post a Comment